ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, September 19, 2020

ಪ್ರೀತಿಯಿಲ್ಲದ ಮೇಲೆ

 ಪ್ರೀತಿಯ ಮೊಳಕೆಯೊಡೆದು

ಸಲುಗೆಯ ಸಸಿಯೊಡೆದು

ಹಚ್ಚ ಹಸಿರು ತೆನೆಯೊಡೆದು

ಹೆಮ್ಮರವಾಗಿ ಟಿಸಿಲೊಡೆದು

ಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲು

ಬಿಳಲುಗಳು ಭೂಮಿಯತ್ತ ಚಾಚುತಲಿರಲು


ಕೊಡಲಿಯಿಂದ ಭಾಹುಗಳ ಕಡಿದು

ಬೇರುಗಳ ಕಿತ್ತು ಹಾಕಿದವಳು ನೀನು  

ಹಸಿರೇ ಉಸಿರೆಂದವಳು ನೀನು

ನನ್ನುಸಿರು ನೀನೆ ಅಂದವನು ನಾನು

ಭಾನೆಗಳ ಬಣ್ಣದಾಟದಲಿ ಬಡವಾಯ್ತು ಬದುಕು!

ಬೆತ್ತಲಾಗಿದೆ ಭಾವನೆಗಳು

 ನಿನ್ನೆದೆಯ ಕಣಿವೆಯಲಿ

ಸೌಂದರ್ಯದ ಗಣಿಯಲಿ

ಬಿಸಿಯುಸಿರ ಬೆಂಕಿಯಲಿ

ತಾಳತಪ್ಪಿದ ಎದೆ ಬಡಿತದಲಿ

ಹುಡುಕುತಿರುವೆ ಒಲವಿನಾ ಕಿಡಿಯ

ಕೆಂದುಟಿಯ ಜೇನು

ಹೀರುವ ದುಂಬಿ ನಾನು

ಕಣ್ಣ ನೋಟದಲಿ

ಮೈ ಮಾಟದಲಿ

ಹೊಕ್ಕಳ ಆಳದಲಿ

ಬೆತ್ತಲಾಗಿದೆ ಭಾವನೆಗಳು


ನೀ ತೊಟ್ಟ ಸೀರೆಯಲಿ

ಸೊಂಟದ ಡಾಬಿನಲಿ

ಕಣ್ಣಂಚಿನ ಮಿಂಚಿನಲಿ

ಕಾಲ್ಗೆಜ್ಜೆ    ಸದ್ದಿನಲಿ

ಹುಡುಕುತಿರುವೆ ಒಲವ ಕಿಡಿಯ ಮತ್ತೆ 

ಬೆತ್ತಲಾಗಿ ನಿಂತಿವೆ ಭಾವನೆಗಳು ಮತ್ತೆ ಮತ್ತೆ

Friday, June 19, 2020

ಹಳೆಯ ನೆನಪು!

ಇವತ್ತು ನನ್ನ ದೊಂದು ಬ್ಲಾಗ್ ಇದೆ ಅದರಲ್ಲಿ ಒಂದಕ್ಷರವೂ ಬರೆಯದೇ ಯಾವ ಕಾಲವಾಯಿತು ಏನಾದರೂ ಬರೆಯಲೇ ಬೇಕು ಅಂತ ಮನಸ್ಸು ಬಹಳವಾಗಿ ಕಾಡತೊಡಗಿತು ಮತ್ತೆ!

 ಅಂದಹಾಗೆ ಈಗ ಬ್ಲಾಗ್ ಓದುವವರು ಕಡಿಮೆಯಾಗಿದ್ದಾರ??..  ಬ್ಲಾಗ್ ಇದೆ ಅನ್ನೋದು ನನಗೇ ಮರೆಯುವಷ್ಟು ದಿನ ಆಗೋಯ್ತು.. ಸಲೀಸಾಗಿ ಓದಿಸಿಕೊಂಡು ಹೋಗುವಂತೆ ಬರೆಯುವುದು ನನ್ನಿಂದ ಮತ್ತೆ ಸಾಧ್ಯವಾ?

ಬ್ಲಾಗ್ ಆರಂಭಿಸಿದ ದಿನಗಳ ಹಳೆಯ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಳ್ಳುತ್ತಿರುವ ಅನುಭವವಾಗುತ್ತಿದೆ.
ಆಗ ಇದ್ದಿದ್ದು 2g  ಕಾಲ ಜೊತೆಗೆ ನಮ್ಮ ಮನೆಯಲ್ಲಿ ಇದ್ದಿದ್ದು kbps ವೇಗದ ಬಿಎಸ್ಎನ್ಎಲ್ ನ ವಿಲ್ ಫೋನು! ಅದರಲ್ಲಿ ಇಂಟರ್ನೆಟ್ ಕನೆಕ್ಟಾದರೆ ಕಾಲ್ ಮಾಡೋಕೆ ಬರುತ್ತಿರಲಿಲ್ಲ ಜೊತೆಗೆ ಒಳಬರುವ ಕರೆಗಳು ಬರುತ್ತಿರಲಿಲ್ಲ.. ಬಿಎಸ್ಎನ್ಎಲ್ ಇದಕ್ಕಾಗಿ ತರಿಸಿಕೊಂಡ ಫೋನ್ ಹೆಸರು ಹುವಾವೆ!(Huawei)ನಂತರ ಅದನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೂ ಬಳಕೆಯಲ್ಲಿದ್ದದ್ದು ಮಾತ್ರ ಅದೇ!(ಚೈನಾ ಚೈನಾ!)
ಮೊಬೈಲುಗಳಲ್ಲಿ ತಿಂಗಳಿಗೆ ಕೊಡುತ್ತಿದ್ದ ಡಾಟಾ ಬರೋಬ್ಬರಿ ಒಂದು ಅಥವಾ ಎರೆಡು ಗಿಗಾಬೈಟುಗಳು!
ಗೂಗಲ್ ಟಾಕ್ ಆರ್ಕುಟ್ ಅದೆಷ್ಟು ಜನರಿಗೆ ನೆನಪಿದೆಯೋ ಏನೋ.
ಆದರೆ ಇವೆಲ್ಲದರಿಂದ ಸಿಕ್ಕಿದ್ದು ಮಾತ್ರ ಅಪರಿಮಿತವಾದ ಗೆಳೆಯರು ಗೆಳತಿಯರು... 
ಬ್ಲಾಗ್ ಗಳು ಅತೀ ಹೆಚ್ಚೆಚ್ಚು ಹುಟ್ಟಿಕೊಳ್ಳುತ್ತಿದ್ದ ಕಾಲವದು ಹೆಚ್ಚಿನವರ ಬ್ಲಾಗ್ ಗಳಲ್ಲಿ ಅವರದೊಂದು ಬ್ಲಾಗ್ ಗಾಗಿ ಯೇ ಮಾಡಿಕೊಂಡ ಹೆಸರುಗಳಿರುತ್ತಿದ್ದವು..


ಮನಸ್ವಿ ಅನ್ನೋದು ನಾನಿಟ್ಟುಕೊಂಡ ಬ್ಲಾಗ್ ನಾಮಧೇಯ.. ಇವತ್ತಿಗೂ ಅದೇ ಹೆಸರಲ್ಲಿ ಬರೆಯೊದೇ ನನಗೆ ಖುಷಿ ಕೊಡುತ್ತೆ.. 

ಬರೋಬ್ಬರಿ ಹನ್ನೆರೆಡು ವರ್ಷಗಳಾಗಿ ಹೋಯ್ತು ಈ ಬ್ಲಾಗ್ ಆರಂಭಿಸಿ.. ವರ್ಷಕ್ಕೊಮ್ಮೆ ಬ್ಲಾಗಿಗೆ ಅದರ ಅನಿವರ್ಸರಿ ಹುಟ್ಟಿದಬ್ಬ ಯಾವುದನ್ನು ಮಾಡಲೇ ಇಲ್ಲ ಆದರೂ ಒಂದೇ ಒಂದು ದಿನವೂ ನನ್ನ ಮೇಲೆ ಕೋಪಮಾಡಿಕೊಳ್ಳಲಿಲ್ಲ.. ಅದೆಷ್ಟೊ ದಿನಗಳು ವಾರ ತಿಂಗಳು ನನ್ನ ಬ್ಲಾಗಿನ ಕದವನ್ನೇ ತೆರೆಯದಿದ್ದರು ಗೂಗಲ್ ಕೃಪೆಯಿಂದ ಎಲ್ಲವೂ ಹಾಗೆಯೇ  ಯಥಾವತ್ತಾಗಿವೆ. ನಮ್ಮ ಹೆಚ್ಚಿನವರ ಬ್ಲಾಗುಗಳಲ್ಲಿ ಇನ್ನೊಬ್ಬರ ಬ್ಲಾಗಿಗೆ ಹೋಗಲು ಲಿಂಕ್ ಗಳಿದ್ದಾವೆ ಇನ್ನೂ ಸಹ.. ನಮ್ಮ ಬರಹ ಒದಿ ಅಥವಾ ಇಷ್ಟವಾಗದವರು ಮತ್ತೊಬ್ಬರ ಅದ್ಬುತ ಅನ್ನುವಷ್ಟರ ಮಟ್ಟಿಗೆ ಬರೆಯುವವರ ಬ್ಲಾಗಿಗೆ ದಾಟುವ ಹಾದಿಯಿದೆ!

ಈಗ ಬ್ಲಾಗ್ ಗಳಲ್ಲಿ ಬರೆಯೋದಕ್ಕಿಂತ ಸುಲಭವಾಗಿ.. ಫೇಸ್ಬುಕ್ ವಾಟ್ಸಪ್ ಗಳಲ್ಲಿ ಅನ್ನಿಸಿದ್ದೆನ್ನೆಲ್ಲಾ ಹೇಳಿಬಿಡಬಹುದು ಕ್ಷಣಮಾತ್ರದಲ್ಲಿ ಎಲ್ಲರೂ ಓದಿ ನೋಡಿ ಸುಮ್ಮನಿದ್ದುಬಿಡಬಹುದು.. ನೋಡುಗರ ಸಂಖ್ಯೆ ನೂರರ ಗಡಿದಾಟಿದ್ದರು ಒಬ್ಬರಿಬ್ಬರಿಗಾದರು ಅರ್ಥವಾಯಿತೋ ಗೊತ್ತಾಗೋದೇ ಇಲ್ಲ ಲೈಕು ಸಿಂಬಲ್ಲುಗಳಲ್ಲೇ ಮುಗಿದು ಹೋಗುತ್ತೆ!

ನಾವು ಸುಮಾರಷ್ಟು ವಿಷಯಗಳಿಗೆ ಪ್ರತಿಕ್ರಿಯಿಸೋ ಗೋಜಿಗೆ ಹೋಗೋದಿಲ್ಲ..ನಾವ್ಯಾಕೆ ಹೀಗೆ?
ಪ್ರತಿಕ್ರಿಯೆ ನೀಡಲು ಸಮಯವಿಲ್ಲವಾ? 
ಅನಿಸಿದ್ದಷ್ಟು  ಹಂಚಿಕೊಳ್ಳ ಬೇಕೆನಿಸಿತು.. 

ನಿಮ್ಮ ಅನಿಸಿಕೆಗಳ ಬರುವಿಕೆಯ ನಿರೀಕ್ಷೆಯಲ್ಲಿ... ಕಾಯ್ತಾ
ಇದೀನಿ!

Saturday, July 6, 2019

ಇರೋದು ಒಂದೇ ಪುಟ್ಟ ಜೀವನ

ಹೃದಯದಲಿ ಕೆಟ್ಟ ರಕ್ತದ ಕವಾಟವಿದೆ

ಮೆದುಳಿನಲಿ ಕೆಟ್ಟ ಯೋಚನೆಯ ಹುರಿದುಂಬಿಸುವ        ರಾಸಾಯನಿಕವಿದೆ
 
ಆದರೂ ಇವೆಲ್ಲದರ ನಡುವೆ ಒಂದೊಳ್ಳೆ ಮನಸಿದೆ

ಎದೆ ಬಡಿತಕ್ಕೆ ಕಿವಿಗೊಟ್ಟು ಆಲಿಸು ನಿನಗಾಗಿಯೇ ಬಡಿದುಕೊಳ್ಳುತಿದೆ ಬಿಡುವಿಲ್ಲದೇ......

ನಂಬಿಕೆಯೆಂಬುದರ ಮೇಲೆ ಬದುಕ ಬಂಡಿಯಿದೆ

ಬದುಕಿ ಬಿಡುವ ಬಾ ಇರುವುದೊಂದೇ ಪುಟ್ಟ ಜೀವನ

Wednesday, December 19, 2018

ಬಸ್ಸಿನ ಪ್ರಯಾಣ! ಹಿಂದಿನ ಸೀಟಿನವನ ಫೋನ್ ಮಾತು. ಕನ್ವರ್ ಲಾಲ್ ನ ನೆನಪು!!!

     ಶಿವಮೊಗ್ಗದಲ್ಲಿ ಒಂದು ಮದುವೆಯಿತ್ತು ಹೊರಟಿದ್ದೆ.. ಐದು ನಿಮಿಷಕ್ಕೊಂದು ಬಸ್ಸಿರೊದಕ್ಕೆ ಬಸ್ಸಿನ ಪ್ರಯಾಣನೇ ಸುಖ ಅನ್ನಿಸಿ ಬಸ್ಸು ಹತ್ತಿದೆ.. ಬಸ್ಸು ನಿಧಾನಕ್ಕೆ ಹೊರಟಿತ್ತು.. ಡ್ರೈವರ್ ಇನ್ನೆರೆಡು ಜನ ಬಂದರೆ ಬರಲಿ ಅಂತ ಆಮೆ ವೇಗದಲ್ಲಿ ಹೊರಟಿದ್ದ!.. ಬಸ್ಸು ಹಾಗೆ ಮುಂದೆ ಸಾಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಯಾರಿಗೋ ಫೋನ್ ಮಾಡಿ ಮಾತಾಡಲು ಶುರು ಮಾಡಿದ್ದ.. ಆತನದು ಅಚ್ಚ ಕನ್ನಡ ವ್ಯಾಕರಣ ಶುದ್ಧವಾದ ಮಾತದು.. ನನ್ನ ಗಮನವನ್ನು ಕಿಟಿಕೆಯಾಚೆಗಿನ ಪ್ರಕೃತಿ ಗದ್ದೆಯ ಕಡೆ ಹರಿಸಿದೆ.. ಆದರೆ ಕಿವಿ  ಹಿಂದೆ ಕುಳಿತವನ ಮಾತನ್ನು ಆಲಿಸುತ್ತಲ್ಲೇ ಇತ್ತು.. ಕೆಳಲ್ಲ ಜೋರು ಮಾತಾಡಕ್ಕಾ ಅಂತ ದೊಡ್ಡ ದನಿಯಲ್ಲಿ ಮಾತಿಗಿಳಿದಿದ್ದ.. ನಿಮಿಷಕ್ಕೊಮ್ಮೆ ಅಕ್ಕಾ ಅಕ್ಕಾ ಎನ್ನುತ್ತಿದ್ದ.. ಭಗವಂತನಿಗೆ ಕರುಣೆ ಇಲ್ಲಕ್ಕ.. ಅವಳು ಒಳ್ಳೆಯವಳಲ್ಲಕ್ಕಾ ಅಂದ.. ನನಗೆ ಪೋನಿನಾಚೆಗಿನ ವ್ಯಕ್ತಿಯ ಪ್ರತಿಕ್ರಿಯೆ ಏನಿರಬಹುದು ಎನ್ನುವ ಕುತೂಹಲ ಶುರುವಿಟ್ಟುಕೊಂಡಿತ್ತು.. ಧ್ವನಿ ಹೇಗಿರಬಹುದು ಇಂಪಾಗಿದೆಯಾ. ಘಟವಾಣಿ ದ್ವನಿಯಾ?

 ಅವಳು ಹೇಗಿರಬಹುದು ಅವಳ ಧ್ವನಿ ಹೇಗಿರಬಹುದು ಅನ್ನಿಸಿದ್ದು ಸುಳ್ಳಲ್ಲ! ಆತ ತನ್ನೆಲ್ಲಾ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದ.. ಎಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿದ್ದ ಎಂದರೆ ಒಂದೇ ಒಂದು ಪದ ಮಿಸ್ಸಾಗೋ ಚಾನ್ಸ್ ಇರಲಿಲ್ಲ.. ಅಕ್ಕ ಅವಳು ನಿಂಗೂ ಭಾವಂಗೂ  ಬೇಜಾರು ಮಾಡಿ ಬಿಟ್ಟಲಕ್ಕ ಭಾವನ ಮನಸ್ಸು ಮಗುವಿನ ಮನಸ್ಸಿನ ತರ.. ಬೇಸರ ಮಾಡ್ಕೊಂಡ್ರೆನಕ್ಕಾ ಎನ್ನುತ್ತಿದ್ದ.. ಇದೊಂಥರಾ ಒನ್ ವೇ ಆಗಿದ್ದಕ್ಕೆ ಅಕ್ಕಯ್ಯನ ಮಾತನ್ನು ನಾನೇ ಕಲ್ಪಿಸಿಕೊಳ್ಳಬೇಕಿತ್ತು ಅವಳು ತಮ್ಮನನ್ನು ಸಮಾಧಾನ ಮಾಡುವ ಹರಸಾಹಸದಲ್ಲಿದ್ದಿರಬಹುದು ಅನ್ನಿಸಿತು.. ಬೇರೆಯವರ ವಿಚಾರ ನಮಗೇಕೆ ಅಂತ ಮೊಬೈಲ್ ನಲ್ಲಿ ಬೆರೆಳಾಡಿಸತೊಡಗಿದೆ.. ಅಷ್ಟರಲ್ಲಿ ಅಕ್ಕಾ ಅಂಬರೀಶ್ ನೋಡಕ್ಕಾ ಎಷ್ಟು ಜನ ಸಂಪಾದನೆ ಮಾಡಿದ್ದ ಆತರ ಜನ ಸಂಪಾದಿಸಬೇಕಕ್ಕ ಅಂದ..

ಅಂಬರೀಶ್ ಬಗ್ಗೆ ಆತ ಹೇಳಿದ್ದು ಅಕ್ಷರಶಃ ಸತ್ಯ ಅನ್ನಿಸಿತು.. ಅದೆಷ್ಟು ಜನ ಸಾಗರ ಮೌನವಾಗಿ ಕಂಬನಿ ಮಿಡಿದಿತ್ತು.. ಬೆಂಗಳೂರಿನಿಂದ ಪಾರ್ಥಿವ ಶರೀರದ ದರ್ಶನಕ್ಕೆ ಪಟ್ಟು ಬಿಡದೆ ಮಂಡ್ಯಕ್ಕೆ ತರಿಸಿದ ಜನ ಒಂದೇ ಒಂದು ಕಡೆಯೂ ಗೌಜು ಗದ್ದಲವಿಲ್ಲದೆ ಬಂದು ಹೋಗುತ್ತಿದ್ದರು. ರಾಜಕುಮಾರ್ ಮತ್ತು ವಿಷ್ಣು ತೀರಿಕೊಂಡಾಗ ನೆಡೆದ ಗಲಾಟೆಗಳು ಗೌಜು ಗದ್ದಲ ಎಲ್ಲೂ ಇರಲಿಲ್ಲ.. ಅಂಬರೀಶ್ ಯಾವನೋ ಅವನು ಗಲಾಟೆ ಮಾಡೋನು ಅಂದು ಬಿಟ್ರೆ ಅನ್ನೋ ತರ ಶಾಕಲ್ಲಿ ಇತ್ತು ಜನತೆ.. ಮಂಡ್ಯದ ಪ್ರತಿ ಮನೆಯ ದೇವರ ಕೋಣೆಯಲ್ಲಿ ಅಂಬರೀಶ್ ಫೋಟೋ ಇದೆಯಂತೆ. ಅಂಬರೀಶ್ ಅವರ ವಿಶಿಷ್ಟ ಮ್ಯಾನರಿಸಮ್ ಡೈಲಾಗ್ ಡೆಲಿವರಿ.. ಕನ್ವರ್ ಲಾಲಾ ನ " ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ" ಅನ್ನೋ ವರೆಗಿನ  ಡೈಲಾಗ್.. ಅಂಬಿಕಾ ಜೊತೆಗಿನ ಛಳಿ ಛಳಿ ತಾಳೇನು ಈ ಛಳಿಯಾ ಹಾಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿನಗಳು ಹೀಗೆ ಮನಸ್ಸು ಅಂಬಿ  ಇಲ್ಲ ಅನ್ನೋ ಸತ್ಯಕ್ಕೆ ಒಗ್ಗಿಕೊಳ್ಳಲು ಕಷ್ಟ ಪಡುತ್ತಲಿತ್ತು. ಮನಸ್ಸಿನ ತುಂಬಾ ಕನ್ವರ್ ಲಾಲ್ ತುಂಬಿಹೋಗಿದ್ದ.

ಇಷ್ಟಾದರೂ ಆನ್ ಲಿಮಿಟೆಡ್ ಕಾಲ್ ಮಹಿಮೆ ಆತ ಮಾತು ಮುಂದುವರೆಸಿದ್ದ.. ಅಕ್ಕಾ ನಿನ್ನ ಮಗ ನನ್ನ ಮಗ ಇದ್ದಂಗೆ ಚಾನಾಗಿ ನೋಡ್ಕೋಬೇಕಕ್ಕ ಅಂದ.. ದೇವರು ಇದ್ರೆ ಮನೆ ಕಟ್ಟಿ ಊಟ ಹಾಕ್ತಿನಕ್ಕ.. ಮಂಜಣ್ಣ ನ ಹಾಗೆ ಮನೆ ಕಟ್ಟಿ ಅವನ ತರ ಜನಾನ ದೂರ ಮಾಡ್ಕೊಳಲ್ಲ ಎಲ್ಲರೂ ಜೊತೆಗಿರಬೇಕಕ್ಕ ಅಲ್ವೇನಕ್ಕ ಅನ್ನುತ್ತಿತ್ತು.. ಮಂಜಣ್ಣ ಯಾರು ಗೊತ್ತಿಲ್ಲ.. ಆ ಅಕ್ಕ ಅವನ ಸ್ವಂತ ಅಕ್ಕನೋ ಜೊತೆಗೆ ಆಡಿ ಬೆಳೆದವಳಾ.. ಅಥವಾ ಪಕ್ಕದ ಮನೆಯವಳಾ.. ನಾನು ಬಸ್ಸು ಇಳಿಯುವ  ಜಾಗ ಬಂದಿತ್ತು.. ಇಳಿಯುವಾಗ  ಹಿಂದೆ ತಿರುಗಿ ಅವನ ಮುಖ ನೋಡಿ ಬಿಡಲ ಅನ್ನೋ ಕುತೂಹಲ ಕಾಡತೊಡಗಿತ್ತು.. ಆದರೆ ಅವನ ದ್ವನಿಯೊಂದೇ ನೆನಪಿನಲ್ಲಿರಲಿ ಎಂದು ಅವನನ್ನು ನೋಡದೆ ಕೆಳಗಿಳಿದುಬಿಟ್ಟೆ...

ಆತ ಹೇಗಿರಬಹುದು.. ಅವಳ ದ್ವನಿ ಹೇಗಿರಬಹುದು.. ಅವಳ ಮಗ ಹೇಗಿರಬಹುದು.. ನಿಮ್ಮ ಕಲ್ಪನೆಗೆ ಬಿಟ್ಟಿದ್ದು.

Saturday, November 24, 2018

ಸುಪ್ರೀಂ ಪವರ್ರು ಸಲಿಂಗಕಾಮ #meetoo

ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವ ಇದೆ ಹಾಗಂತ ಮಾಡಿದ ಅನ್ಯಾಯಗಳನ್ನು ಮರೆಯೋದು ಹೇಗೆ? ಕಾವೇರಿ ವಿಚಾರದಲ್ಲಿ ನೀರಿಲ್ಲದ್ದು ಕಣ್ಣಿಗೆ ಕಾಣಿಸಿದರೂ ತಮಿಳುನಾಡಿಗೆ  ಇಂತಿಷ್ಟು ಕ್ಯೂಸೆಕ್ಸ್ ನೀರು ಬಿಡಲು ಸೂಚಿಸೋದು.

ಸಲಿಂಗ ಕಾಮ ಅಪರಾಧ ಅಲ್ಲ ಅನ್ನೋದು ಸಹ ಚರ್ಚೆಗೆ ಗ್ರಾಸವಾಗೋ ವಿಚಾರ ಆದರೆ ನಮ್ಮ ದೇಶ ಇನ್ನು ಸುಸಂಸ್ಕೃತ ಆಚಾರ ವಿಚಾರ ಹೊಂದಿರುವ ದೇಶ.. ನಾಲ್ಕು ಗೋಡೆಗಳ ನಡುವೆ ನಡೆಯೊದನ್ನ ಸಾರ್ವಜನಿಕವಾಗಿ ಮಾತಾಡಲು ಇನ್ನು ಮುಜುಗರ ಪಡುತ್ತಾರೆ.. ದೇಶದ ಶೇಕಡಾ 60 ಕ್ಕಿಂತ ಹೆಚ್ಚಿನ ಜನ ಸ್ನಾನ ಮಾಡುವಾಗ    ಸಹ ಅಂಡರ್ವೇರ್ ಧರಿಸಿ ಸ್ನಾನ ಮಾಡುತ್ತಾರಂತೆ!

     ಸಲಿಂಗ ಕಾಮ ಅನ್ನೋದು ಸಮಾನತೆ ತರುವುದರ ಜೊತೆ ಅಸ್ವಾಭಾವಿಕ ಮಾನವನ ವಿಕೃತ ಮನಸ್ಥಿತಿಯ ಸೂಚಕ... ಒಬ್ಬ ಗಂಡಸಿಗೆ ಒಂದು ಹೆಣ್ಣಿನ ಮೇಲೆ ಪ್ರೇಮ ಪ್ರೀತಿ ಕಾಮ ಭಾವನೆ ಮೂಡುವುದು ಸ್ವಾಭಾವಿಕ ಪ್ರಾಕೃತಿಕ ಸಹಜ ಪ್ರಕ್ರಿಯೆ.. ಹಾಗೆಯೇ ಹೆಣ್ಣಿಗೂ ಸಹ ಕಟ್ಟುಮಸ್ತಾದ ಗಂಡಿನ ಮೇಲೆ ಭಾವನೆಗಳ ಹೊಯ್ದಾಟವೂ ಸಹ.. ಅದೇ ತರಹ, ಹಾಗಂತ ಆಕೆ ತನ್ನಲ್ಲಿನ ಭಾವನೆಗಳ ಮೇಲೆ ಇರೋ ಹಿಡಿತ ಗಂಡಸಿಗೆ ಇರೋದು ಕಷ್ಟಕರ..ಹಾಗಂತ ಗಂಡಸರು ಮಾತ್ರ ಕಚ್ಛೆ ಹರುಕರು ಅಂತಲ್ಲ.. ಈಗಿನ ಮಾಡರ್ನ್ ಹುಡುಗಿಯರು ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಗಂಡಸರಿಗೆ ಸವಾಲು ಹಾಕುವ ಕಾಂಡಮ್ ಪ್ಯಾಕೇಟುಗಳನ್ನು ಜೊತೆಗೆ ಇರಲಿ ತಕ್ಷಣಕ್ಕೆ ಸಿಗದೆ ಹೋದರೆ ಅಂತ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಳ್ಳುವ ಕಾಲವು ಬಂದಿದೆ.ಗಂಡು ಗಂಡಿನ ಜೊತೆ,  ಹೆಣ್ಣು ಹೆಣ್ಣಿನ ಜೊತೆ ಕಾಮಕ್ರಿಯೆಯಲ್ಲಿ ತೊಡಗುವುದು ಮಾನವರಲ್ಲಿ ಮಾತ್ರ ಮತ್ಯಾವ ಪ್ರಾಣಿಗಳಲ್ಲೂ ಇಲ್ಲ.. ಅದೇ ರೀತಿ  ಹೆಣ್ಣು ಹೆಣ್ಣಿನ ಕಾಮದಿಂದ ಮಕ್ಕಳನ್ನು ಪಡೆಯೋದು ಅಸಾಧ್ಯ!

ಸುಪ್ರೀಂ ಪವರ್ ಇದೇ ಅಂತ ಏನೇನೋ ತೀರ್ಪು ಕೊಡೋದು ಎಷ್ಟು ಸಮಂಜಸ... ಅನೈತಿಕ ಸಂಬಂಧ ಅಪರಾಧವಲ್ಲ ಅಂದರೆ ಮೊದಲು ಮನಸ್ಸಿನ ಒಳಗೆ ಹುಟ್ಟೋ ಗೊಂದಲ ಅರೇ ಹೀಗೂ ಸಾಧ್ಯನಾ ಅಂತ
ಅರೆ ಯಾರದೋ ಹೆಂಡತಿ ಜೊತೆಗೆ ಸಂಬಂಧ ಇಟ್ಟುಕೊಂಡರು ತಪ್ಪು ಅಲ್ಲವಾ.
       ಮದುವೆಯಾಗಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದವರಲ್ಲೂ ಒಂದು ಕ್ಷಣಕ್ಕೆ  ಮನಸ್ಸಿನ ಒಂದು ಮೂಲೆಯಲ್ಲಿ ವ್ಯಭಿಚಾರ ಅಪರಾಧ ಅಲ್ಲವಾ ಎನ್ನುವ ಪ್ರಶ್ನೆ ಹಾದುಹೋದರೆ??

ಈಗಿನ ಚಲನಚಿತ್ರಗಳಲ್ಲೂ ಸಹ  ಸೆಕ್ಸ್ ದೃಶ್ಯಗಳು ಸಾಮಾನ್ಯವಾಗಿ ಹೋಗಿದೆ.. ಅದರಲ್ಲೂ ಸಹ ಲಿವಿಂಗ್ ಟುಗೆದರ್.. ಮದುವೆಯಾಚೆಗಿನ ಕಾಮ ಸಂಬಂಧಗಳನ್ನೇ ತೋರಿಸೋದು ಹೆಚ್ಚು.. ಹದಿ ಹರೆಯದವರಲ್ಲಿ ಅದೇ ಭಾವನೆಗಳು ಹುಟ್ಟಬಹುದಲ್ಲವಾ???

ದೊಡ್ಡ ಗೌಡರ ಮನೆಯ ಕೆಂಪಿ.. ಸುಬ್ಬಾಹೆಗ್ಡೆರ ಮನೆ ಭಾಗಿ.. ಸಣ್ಣಭಟ್ಟರ ಮನೆ ಸುಬ್ಬಿ ತೋಟದ ಮನೆಗೆ ಹೋಗೋದು  ಗುಟ್ಟಾಗಿ ಉಳಿದಿರಲೇ ಇಲ್ಲ.. ಆಗ ಅದು ಈಗಿನ ಒಪ್ಪಿಗೆ ಕಾನೂನು ಏನು ಮಾಡಿದ್ದಾರೋ ಅದೇ ತರಹ ಒಪ್ಪಿತ ಸಂಬಂಧವಾಗಿದ್ದಿರಬಹುದು.. ಆಗ #meetoo ಇರಲಿಲ್ಲ ಈಗಿನ ಹಾಗೆ ಮೀಟಿಸಿಕೊಂಡು ಹತ್ತಾರು ವರ್ಷ ಕಳೆದ ಮೇಲೆ ಆತ ನನ್ನೊಂದಿಗೆ ಅದು ಮಾಡಿದ್ದ ಇದು ಮಾಡಿದ್ದ ಅನ್ನೋದಿಕ್ಕೆ!

ಗಂಟಲಾಳದಲ್ಲಿ  ಹೇಳೋದಕ್ಕೆ ಇನ್ನೂ ಸಾಕಷ್ಟಿದೆ.. ಈಗ ಸಾದ್ಯಕ್ಕಿಷ್ಟು ಸಾಕು.. ಮುಂದುವರೆಯುತ್ತದೆ*
(2022ರ ಓಳಗೆ)☺️